ಕಾರು ಅಪಘಾತದಲ್ಲಿ ಗಾಯಗೊಂಡು ತೀವ್ರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಮುಂಬೈನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಶನಿವಾರ ಇಲ್ಲಿನ ಕೋಕಿಲಾಬೆನ್ ಪಾರ್ದಿವಾಲಾ ನೇತೃತ್ವದ ವೈದ್ಯಕೀಯ ತಂಡ ರಿಷಭ್ ಪಂತ್ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿತು ಎಂದು ತಿಳಿದು ಬಂದಿದೆ. ಪಂತ್ ಅವರನ್ನು 3 ರಿಂದ 4 ದಿನಗಳವರೆಗೆ ನಿಗಾ ಘಟಕದಲ್ಲಿ ಇಡಲಾಗುತ್ತದೆ ಎಂದು ತಿಳಿದು ಬಂದಿದೆ.
ಮೊಣಕಾಲಿಗೆ ಅಸ್ಥಿರಟ್ಜು ತುರ್ತು ಚಿಕಿತ್ಸೆ ಮಾಡಬೇಕಾಗಿದ್ದರಿಂದ ಡೆಹರಡೂನ್ನಿಂದ ಮುಂಬೈಗೆ ಏರ್ಲಿಫ್ಟ್ ಮಾಡಬೇಕಾಗಿತ್ತು.
ಚಿಕಿತ್ಸಗೆ ಡೆಲ್ಲಿ ಡ್ಯಾಶರ್ ಪಂತ್ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಡಿ.30ರಂದು ರಿಷಭ್ ಪಂತ್ ದೆಹಲಿಯಿಂದ ರೂರ್ಕಿಗೆ ತೆರೆಳುತ್ತಿದ್ದರು. ಪಂತ್ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆಯಿತು. ಅಪಘಾತಕ್ಕೀಡಾದಾಗ ಸ್ಥಳೀಯ ವ್ಯಕ್ತಿಗಳು ಪಂತ್ ಅವರನ್ನು ಕಾಪಾಡಿದರು. ಕಾರು ಬೆಂಕಿಯಲ್ಲಿ ಉರಿದು ಹೋಯಿತು. ಪಂತ್ ಅದೃಷ್ಟದ ಬಲದಿಂದ ಜೀವ ಉಳಿಸಿಕೊಂಡರು.ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಅವರನ್ನು ಡೆಹರಡೂನ್ ಆಸ್ಪತ್ರೆಗೆ ದಾಖಲಿಸಲಾಯಿತು.