ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ಆಟಗಾರರು ಜೂನ್ 23 ರಂದು ಪ್ರವಾಸ ಬೆಳೆಸಲಿದ್ದಾರೆ. ಭಾನುವಾರ ಕೊನೆಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಂತರ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಕೋಚ್ ರಾಹುಲ್ ದ್ರಾವಿಡ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಸೋಮವಾರ ಮುಂಜಾನೆ ಇಂಗ್ಲೆಂಡ್ಗೆ ತೆರಳಿದರು. ಸ್ಟ್ಯಾಂಡ್ಬೈ ಆಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಮಯಾಂಕ್ ಅಗರ್ವಾಲ್ ಭಾರತದಲ್ಲಿಯೇ ಉಳಿಯಲಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ, ತಂಡವು ಜುಲೈ 1 ರಿಂದ ಎಜ್ಬಾಸ್ಟನ್ನಲ್ಲಿ ಕಳೆದ ವರ್ಷದಲ್ಲಿ ಉಳಿದ 1 ಟೆಸ್ಟ್ ಪಂದ್ಯವನ್ನು ಆಡಬೇಕಾಗಿದೆ. ಕಳೆದ ವರ್ಷ, ಐದು ಟೆಸ್ಟ್ಗಳ ಸರಣಿಯಲ್ಲಿ 4 ಪಂದ್ಯಗಳನ್ನು ಆಡಿದ ನಂತರ ಟೀಂ ಇಂಡಿಯಾ ಅಕ್ಟೋಬರ್ನಲ್ಲಿ ನಿಂದ ಹಿಂದಿರುಗಿತ್ತು..
ತಂಡದ ಕೆಲವು ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇದಾದ ಬಳಿಕ ಟೀಂ ಇಂಡಿಯಾ ಕೊನೆಯ ಟೆಸ್ಟ್ ಆಡದೇ ತಂಡಕ್ಕೆ ಮರಳಿದೆ.

ಭಾರತ ತಂಡವು ಟೆಸ್ಟ್ಗೆ ಮೊದಲು ಜೂನ್ 24 ರಿಂದ ಲೀಸೆಸ್ಟರ್ಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಬೇಕಾಗಿದೆ. ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಆಟಗಾರರು ಈಗಾಗಲೇ ಇಂಗ್ಲೆಂಡ್ಗೆ ತೆರಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ಬಳಿಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸದಲ್ಲಿ ಟಿ-20 ಸರಣಿಗೆ ತೆರಳುವ ತಂಡದ ಸದಸ್ಯರು ಜೂನ್ 23 ರಂದು ಮುಂಬೈನಲ್ಲಿ ಸೇರಲಿದ್ದಾರೆ. ಅಲ್ಲಿಂದ ಎಲ್ಲ ಆಟಗಾರರು ಐರ್ಲೆಂಡ್ಗೆ ತೆರಳಲಿದ್ದಾರೆ. ಭಾರತ ತಂಡ ಜೂನ್ 26 ಮತ್ತು 28 ರಂದು ಐರ್ಲೆಂಡ್ ಜೊತೆ ಟಿ-20 ಪಂದ್ಯಗಳನ್ನು ಆಡಬೇಕಿದೆ.