ತವರಿನಲ್ಲಿ ಗೆದ್ದು ಬೀಗಿರುವ ಆರ್ಸಿಬಿ ಮತ್ತೊಂದು ಸವಾಲು ಎದುರಿಸುತ್ತಿದ್ದು ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಐಪಿಎಲ್ನ ಎರಡು ಬಲಿಷ್ಠ ತಂಡಗಳ ಹೈವೋಲ್ಟೇಜ್ ಕಾದಾಟವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಉಭಯ ತಂಡಗಳು ಈ ಬಾರಿ ಏಳು ಬೀಳುಗಳನ್ನು ಕಂಡಿವೆ.
ಆರ್ಸಿಬಿ ತಂಡ ಡೆಲ್ಲಿ ವಿರುದ್ಧ ಗೆದ್ದು ಬೀಗಿದ್ದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ತಂಡಕ್ಕೆ ಸಕಾರಾತ್ಮಕವಾಗಿದೆ. ಕೊಹ್ಲಿ ಅಬ್ಬರ ಎದುರಾಳಿ ಪಾಳೆಯದಲ್ಲಿ ನಡುಕ ಹುಟ್ಟಿಸಲಿದೆ.
ನಾಯಕ ಫಾಫ್ ಡುಪ್ಲೆಸಿಸ್ ವಿರಾಟ್ ಜತೆ ಉತ್ತಮ ಆರಂಭವನ್ನು ನೀಡುತ್ತಾ ಬಂದಿದ್ದಾರೆ. ಮಧ್ಯಮ ಕ್ರಮಾಂಕ ಸುಧಾರಿಸಿಕೊಳ್ಳಬೇಕಿದೆ. ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಒಳ್ಳೆಯ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಮಹಿಪಾಲ್ ಲೊಮ್ರೊರೊರ್ ಹಾಗೂ ಶಾಹಬಾಜ್ ಅಹ್ಮದ್ ಅಬ್ಬರಿಸಬೇಕಿದೆ.
ಕಳೆದ ಆವೃತ್ತಿಯಲ್ಲಿ ಫಿನಿಶರ್ರಾಗಿ ಕಾರ್ಯ ನಿರ್ವಹಿಸಿದ್ದ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ಮಾಡಿಲ್ಲ.
ಚೆನ್ನೈ ತಂಡದ ನಾಯಕ ಧೋನಿ ಮಂಡಿ ನೋವಿಗೆ ಗುರಿಯಾಗಿದ್ದರೂ ತಂಡವನ್ನೂ ಮುನ್ನಡೆಸಲಿದ್ದಾರೆ.
ರಾಜಸ್ಥಾನ ವಿರದ್ಧು ವೀರೋಚಿತ ಸೋಲು ಅನುಭವಿಸಿದ ನಂತರ ಧೋನಿ ಕುಂಟುತ್ತಿದ್ದರು. ಆರ್ಸಿಬಿ ವಿರುದ್ಧ ಆಡ್ತುತಾರಾ ಅನ್ನೋದು ಅನುಮಾನದಿಂದ ಕೂಡಿದೆ.
ಒಂದು ವೇಳೆ `ಧೋನಿ ಆಡಿದರೂ 8ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯಬಹುದಾಗಿದೆ. ಬಹುತೇಕ ಪಂದ್ಯಗಳಲ್ಲಿ ಧೋನಿ ತಂಡವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದಿದ್ದಾರೆ.
ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಹಾಗೂ ಡೆವೊನ ಕಾನ್ವೆ ಉತ್ತಮ ಆರಂಭ ನೀಡುತ್ತಿದ್ದಾರೆ. ಮೂರನೆ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ರನ್ ವೇಗೆ ಹೆಚ್ಚಿಸುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಅನುಭವಿ ಬ್ಯಾಟರ್ ಅಂಬಾಟಿ ರಾಯ್ಡು, ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ದುಬೆ ನಾಲಕು ಇನ್ನಿಂಗ್ಸ್ಗಳಿಂದ ರನ್ ಗಳಿಸಲು ಪರದಾಡುತ್ತಿದ್ದು 118.84 ಸ್ಟ್ರೈಕ್ ರೇಟ್ ಪಡೆದಿದ್ದಾರೆ.
ಬೌಲಿಂಗ್ ವಿಭಗದಲ್ಲಿ ದೀಪಕ್ ಚಾಹರ್, ಸಿಸಿಂದಾ ಮಾಗಾಳ ಇನ್ನು ಎರಡು ವಾರ ತಂಡಕ್ಕೆ ಲಭ್ಯಯರಿರುವುದಿಲ್ಲ. ಬೆನ್ ಸ್ಟೋಕ್ಸ್ ತಿಂಗಳ ಅಂತ್ಯದಲ್ಲಿ ಫಿಟ್ ಆಗುವ ಸಾಧ್ಯಯತೆ ಇದೆ.
ವೇಗಿ ಮೊಹ್ಮದ್ ಸಿರಾಜ್ ಅಮೋಘ ಪ್ರದರ್ಶನ ನೀಡುತ್ತಿದ್ದು ಡೆಲ್ಲಿ ವಿರುದ್ಧ ಮಾರಕ ದಾಳಿ ನಡೆಸಿದ್ದರು. ಡೆತ್ ಓವರ್ಗಳಲ್ಲಿ ಪ್ರತಿ ಓವರ್ಗೆ ಹರ್ಷಲ್ ಪಟೇಲ್ 11 ರನ್ ಬಿಟ್ಟುಕೊಡುತ್ತಿದ್ದು ಸುಧಾರಿಸಕೊಳ್ಳಬೇಕಿದೆ.