ನಿರೀಕ್ಷಿಸಿದಂತೆ ಮನೀಷ್ ಪಾಂಡೆ ಪಡೆ ಚೆನ್ನೈನಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್ `ಸಿ’ ಗುಂಪಿನ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ್ ತಂಡದ ವಿರುದ್ಧ 117 ರನ್ ಭರ್ಜರಿ ಜಯ ದಾಖಲಿಸಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಜಮ್ಮು 508 ರನ್ ಸೇರಿಸುವ ಗುರಿ ಪಡೆದು, ಮೂರನೇ ದಿನದ ಅಂತ್ಯದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಮಾಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡ, ನಾಲ್ಕನೇ ಹಾಗೂ ಅಂತಿಮ ದಿನವಾದ ಭಾನುವಾರ ಭೋಜನ ವಿರಾಮದ ನಂತರ 390 ರನ್ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
ಐದನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಲಾನ್ ದೇವ್ಸಿಂಗ್ ಹಾಗೂ ಅಬ್ದುಲ್ ಸಮದ್ ಜೋಡಿ 143 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಬ್ದುಲ್ ಸಮದ್ 70 ರನ್ ಬಾರಿಸಿ ಗೌತಮ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ಲಾನ್ ದೇವ್ಸಿಂಗ್ 110 ರನ್ ಸಿಡಿಸಿ ಔಟ್ ಆದರು.
ಮುಂದೆ ಅಬಿದ್ ನಬಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿ 43 ರನ್ ಮಾಡಿ ಪ್ರಸಿದ್ಧ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ್ ತಂಡದ ಹೋರಾಟ ಹೆಚ್ಚು ಕಡಿಮೆ ಅಂತ್ಯವಾದಂತಾತು.
ಪ್ರಸಿದ್ಧ ಕೃಷ್ಣ 59 ಕ್ಕೆ ನಾಲ್ಕು, ಶ್ರೇಯಸ್ ಅಯ್ಯರ್ 155 ಕ್ಕೆ ನಾಲ್ಕು ಹಾಗೂ ಕೆ.ಗೌತಮ್ 1೨೨ ಕ್ಕೆ ಎರಡು ವಿಕೆಟ್ ಉರುಳಿಸಿದರು.