ದೇಸಿ ಟೂರ್ನಿ ರಣಜಿಯಲ್ಲಿ ಇಂದಿನಿಂದ ಕರ್ನಾಟಕ ಕ್ರಿಕೆಟ್ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಜಮ್ಶಡ್ಪುರದ ಕೀನಾನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಜಾರ್ಖಂಡ್ ತಂಡವನ್ನು ಎದುರಿಸಲಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಖಚಿತಪಡಿಸಿಕೊಂಡಿರುವ ರಾಜ್ಯ ತಂಡ ಕೊನೆಯ ಪಂದ್ಯವನ್ನು ಗೆಲ್ಲಲು ಪಣತೊಟ್ಟಿದೆ.
ಸಿ ಗುಂಪಿನಲ್ಲಿ ರಾಜ್ಯ ತಂಡ 29 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜಾರ್ಖಂಡ್ 23 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಜಾರ್ಖಂಡ್ ಅಗ್ರಸ್ಥಾನಕ್ಕೇರಲಿದೆ.
ಕರ್ನಾಟಕ ಆಡಿದ 6 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು3 ಪಂದ್ಯಗಳನ್ನು ಡ್ರಾ ಮಾಡಿಕೊಂಡು 29 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಜಾರ್ಖಂಡ್ ತಂಡ 6 ಪಂದ್ಯಗಳಿಂದ 3ರಲ್ಲಿ ಗೆದ್ದು 1 ಪಂದ್ಯವನ್ನು ಸೋತು 2ರಲ್ಲಿ ಡ್ರಾ ಮಾಡಿಕೊಂಡು 23 ಅಂಕ ಪಡೆದಿದೆ.
ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್, ಸಮರ್ಥ್ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ವಿಜಯ್ ಕುಮಾರ್ ವೈಶಾಕ್ ಮತ್ತು ಕೆ.ಗೌತಮ್ ಬೌಲಿಂಗ್ ಮಿಂಚು ಬೌಲರ್ಗಳಾಗಿದ್ದಾರೆ.
ಜಾರ್ಖಂಡ್ ಪರ ಸೌರಭ್ ತಿವಾರಿ, ವಿರಾಟ್ ಸಿಂಗ್, ಶಾಬಾಜ್ ನದೀಮ್ ಮತ್ತು ಅನುಕೂಲ್ ರಾಯ್ ತಾರಾ ಆಟಗಾರರಾಗಿದ್ದಾರೆ.