ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥ ಮತ್ತು ಸಿಇಒ ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಪಾಲ್ಗೊಳುವುದರ ಬಗ್ಗೆ ಭರವಸೆ ಪಡೆದಿದೆ.
ಐಸಿಸಿ ಮುಖ್ಯಸ್ಥ ಗ್ರೇಗ್ ಬಾಕ್ರ್ಲೆ ಮತ್ತು ಸಿಇಒ ಗೆï ಅಲ್ಲಾರ್ಡೈಸ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಕಳುಹಿಸುವ ಕುರಿತು ಪಾಕ್ ಕ್ರಿಕೆಟ್ ಜತೆ ಮಾತುಕತೆ ನಡೆಸಲು ಕರಾಚಿಗೆ ಆಗಮಿಸಿದ್ದರು.
ಏಷ್ಯಾಕಪ್ ಆಡಲು ಭಾರತ ಕ್ರಿಕೆಟ್ ತಂಡ ಬಾರದಿರುವ ಹಿನ್ನೆಲೆಯಲ್ಲಿ ವಿಶ್ವಕಪ್ಗೆ ಪಾಕ್ ತಂಡ ಪ್ರಯಾಣ ಮಾಡುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಹೇಳಿದ್ದರು.
ಪಾಕ್ ಕ್ರಿಕೆಟ್ ಮಂಡಳಿಯ ಹೈಬ್ರಿಡ್ ಮಾಡಲ್ ಶಿಫಾರಸ್ಸು ಐಸಿಸಿ ಮತ್ತು ಆತಿಥ್ಯ ವಹಿಸಿರುವ ಬಿಸಿಸಿಐಗೆ ದೊಡ್ಡ ತಲೆ ನೋವಾಗಿತ್ತು. ವಿಶ್ವಕಪ್ಗೂ ಹೈಬ್ರಿಡ್ ಮಾದರಿಯನ್ನು ಅಳವಡಿಸಿ ಎಂದು ಒತ್ತಡ ಹಾಕುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಆಡಲು ಪಾಕ್ ಸರ್ಕಾರ `ಭದ್ರತೆ ದೃಷ್ಟಿಯಿಂದ ಇನ್ನೂ ಅನುಮತಿ ಪಡೆಯಬೇಕಿದೆ ಎಂದು ಪಿಸಿಬಿ ಹೇಳಿದೆ. ಹೀಗಾಗಿ ತಟಸ್ಥ ಸ್ಥಳದಲ್ಲಿ ಆಡಿಸುವಂತೆ ಕೇಳಬಹುದೆಂದು ತಿಳಿದುಬಂದಿದೆ.