ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಾ ಕದನಕ್ಕೆ ಕೌಂಟ್ ಡೌನ್ ಶುರುವಾಗಿದೆ.
ರೋಹಿತ್ ಪಡೆಗಿದು ಸೇಡಿನ ಕದನವಾಗಿದೆ.ಯಾಕಂದ್ರೆ ವರ್ಷದ ಹಿಂದೆಯಷ್ಟೆ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು.
ಆ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಕಹಿಯಾಗಿ ಉಳಿಯಿತು. ಆ ಪಂದ್ಯದಲ್ಲಿ ವೇಗಿ ಶಾಹಿನ್ ಅಫ್ರೀದಿ ಅತ್ಯದ್ಭುತ ಬೌಲಿಂಗ್ ಮಾಡಿ ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಮಿಂಚಿದ್ದರು.
152 ರನ್ ಗೆಲುವಿನ ಗುರಿ ಪಡೆದ ಪಾಕಿಸ್ತಾನ 17.5 ಓವರ್ಗಳಲ್ಲಿ ಗುರಿ ಮುಟ್ಟಿ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಪಾಕ್ ವಿರುದ್ದ 2 ಟಿ20 ಪಂದ್ಯಗಳನ್ನಾಡಿದೆ. ಈ ಎರಡೂ ಪಂದ್ಯಗಳಲ್ಲಿ ವೇಗಿ ಶಾಹೀನ್ ಅಫ್ರೀದಿ ಗಾಯದ ಸಮಸ್ಯೆಯಿಂದಾಗಿ ಆಡಿರಲಿಲ್ಲ.
ಇದೀಗ ಶಾಹೀನ್ ಅಫ್ರೀದಿ ವಿಶ್ರಾಂತಿಯೊಂದಿಗೆ ಫುಲ್ ಫಿಟ್ ಆಗಿದ್ದಾರೆ. ಒಂದು ವರ್ಷದ ನಂತರ ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ವೇಗಿ ಶಾಹೀನ್ ಅಫ್ರೀದಿ ಅವರನ್ನು ಎದುರಿಸುತ್ತಿದ್ದಾರೆ.
ಈ ಘಾತಕ ವೇಗಿ ಮಂದೆ ಈ ತ್ರಿವಳಿ ಬ್ಯಾಟರ್ಗು ಏನು ಮಾಡಬಹುದು ? ಟೀಮ್ ಇಂಡಿಯಾ ಫ್ಯಾನ್ಸ್ ಶಾಹೀನ್ ಅಫ್ರೀದಿ ವಿರುದ್ಧ ಸೇಡು ತೀರಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.
ಒಟ್ಟಿನಲ್ಲಿ ಪಾಕ್ ವೇಗಿಯನ್ನು ಈ ತ್ರಿವಳಿ ಬ್ಯಾಟರ್ಗಳು ಹೇಗೆ ಎದುರಿತ್ತಾರೆ ಅನ್ನೋದಕ್ಕೆ ಬ್ಲಾಕ್ ಬಸ್ಟರ್ ಕದನದಲ್ಲಿ ಗೊತ್ತಾಗಲಿದೆ.