T20 CWC 2022 ಟೂರ್ನಿಯ ಸೂಪರ್-12 ಪಂದ್ಯದಲ್ಲಿ ಟೀಮ್ ಇಂಡಿಯಾ 5 ರನ್ಗಳ ರೋಚಕ ಗೆಲುವು ಸಾಧಿಸಿದೆ. ಆದರೆ ಭಾರತಕ್ಕೆ ದೊರೆತ ಈ ಗೆಲುವು ಭಾರತ ತಂಡಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಕೊನೆಯ ಓವರ್ನಲ್ಲಿ 5 ರನ್ಗಳಿಂದ(DLS ನಿಯಮದ ಅನ್ವಯ) ಗೆಲುವು ಸಾಧಿಸಿತ್ತು. ಅಲ್ಲದೇ ಈ ಗೆಲುವಿನೊಂದಿಗೆ ಭಾರತ ತಂಡದ ಸೆಮಿಫೈನಲ್ ಪ್ರವೇಶದ ಕನಸು ಮತ್ತಷ್ಟು ಗಟ್ಟಿಗೊಂಡಿದೆ. ಆದರೆ ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಲಭಿಸಿದರು, ಈ ಗೆಲುವು ಟೀಂ ಇಂಡಿಯಾಕ್ಕೆ ‘wake-up call’ ಆಗಿದೆ ಎಂದು ಸುರೇಶ್ ರೈನಾ ಖಾಸಗಿ ಸುದ್ದಿವಾಹಿನಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಅಲ್ಲದೇ ಸೆಮೀಸ್ ಹಾದಿಯಲ್ಲಿರುವ ಟೀಂ ಇಂಡಿಯಾಕ್ಕೆ ಸಲಹೆಯನ್ನ ಸಹ ನೀಡಿರುವ ಸುರೇಶ್ ರೈನಾ, ‘ಭಾರತ ನಾಕೌಟ್ ಹಂತದಲ್ಲೇ ತನ್ನ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ’. ಒಂದೊಮ್ಮೆ ಮಳೆ ಅಡ್ಡಿಯಾಗದೆ ಇದ್ದಿದ್ದರೆ ಇಂದಿನ ಪಂದ್ಯ ಸಂಪೂರ್ಣ ಬಾಂಗ್ಲಾದೇಶದ ಪರವಾಗಿರುತ್ತಿತ್ತು. ಬಾಂಗ್ಲಾದೇಶ ಬ್ಯಾಟಿಂಗ್ನ ಮೊದಲ ಏಳು ಓವರ್ಗಳಲ್ಲಿ ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಇದು ಭಾರತಕ್ಕೆ ಎಚ್ಚೆತ್ತುಕೊಳ್ಳಲೇಬೇಕಾದ ಅಂಶವಾಗಿದೆ.
ಪಂದ್ಯದಲ್ಲಿ ನಾವು ಗೆದ್ದಿರಬಹುದು, ಆದರೆ ರೋಹಿತ್ ಶರ್ಮ ಸಹ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾದೇಶ ನಮಗಿಂತ ಉತ್ತಮವಾಗಿ ಆಡಿದರು ಎಂಬುದನ್ನ ಉಲ್ಲೇಖಿಸಿದ್ದಾರೆ. ಹೀಗಾಗಿ ಭಾರತ ಇನ್ನಷ್ಟು ಉತ್ತಮ ರೀತಿಯಲ್ಲಿ ಆಡಬೇಕಾದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯ ಎಚ್ಚರಿಕೆಯ ಗಂಟೆಯಾಗಿದೆ. ಭಾರತ ಸೆಮಿಫೈನಲ್ ಹಾಗೂ ಫೈನಲ್ನಲ್ಲಿ ಇನ್ನೂ ಬಲಿಷ್ಠ ತಂಡವನ್ನ ಎದುರಿಸಲಿವೆ ಎಂದು ರೈನಾ ಹೇಳಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ಯಪಡಿಸಿರುವ ಸುರೇಶ್ ರೈನಾ, ಮುಂದಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನ ತಂಡದಲ್ಲಿ ಆಡಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನ ಮೆಲ್ಬೋರ್ನ್ ಮೈದಾನದಲ್ಲಿ ಆಡಲಿದ್ದು, ಇದು ದೊಡ್ಡ ಮೈದಾನವಾಗಿದೆ. ಹೀಗಾಗಿ ಚಹಲ್ ಅವರನ್ನ ಮುಂದಿನ ಪಂದ್ಯದಲ್ಲಿ ಆಡಿಸಬೇಕೆಂದು ರೈನಾ ತಿಳಿಸಿದ್ದಾರೆ.
ಇದನ್ನೂ ಓದಿ https://sportskarnataka.com/team-india-records-in-t20/