ವಿರಾಟ್ ಗೆ ಶೋಕಾಸ್ ನೋಟಿಸ್ ವಿಚಾರ ನಿಜವಲ್ಲ – ಸೌರವ್ ಗಂಗೂಲಿ ಸ್ಪಷ್ಟನೆ..!
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ಜಟಾಪಟಿ ಸದ್ಯಕ್ಕಂತೂ ಮುಗಿಯಲ್ಲ. ಟೀಮ್ ಇಂಡಿಯಾದ ನಾಯಕತ್ವದಿಂದ ಕೆಳಗಿಳಿದ ನಂತರ ವಿರಾಟ್ ಕುಪಿತಗೊಂಡಿರುವುದು ನಿಜ. ಹಾಗೇ ವಿರಾಟ್ ಕೊಹ್ಲಿ ಎಲ್ಲಾ ಅವಮಾನ, ಸಿಟ್ಟಿಗೆ ಬ್ಯಾಟ್ ನಿಂದ ಉತ್ತರ ನೀಡುತ್ತಾರೆ ಎಂಬ ಲೆಕ್ಕಚಾರವೂ ಬುಡಮೇಲಾಗುತ್ತಿದೆ.
ನಿಜ ವಿರಾಟ್ ಒತ್ತಡದಲ್ಲಿದ್ದಾರೆ. ಹೀಗಾಗಿ ವಿರಾಟ್ ಗೆ ನೈಜ ಬ್ಯಾಟಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲ. ಅತೀಯಾದ ನಿರೀಕ್ಷೆ, ಬಿಸಿಸಿಐ ಜೊತೆಗಿನ ವಿರಸ, ನಾಯಕತ್ವ ಕಳೆದುಕೊಂಡ ಸಿಟ್ಟು ಹೀಗೆ ವಿರಾಟ್ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿ ಯಾವುದೇ ಹಂತದಲ್ಲೂ ತಿರುಗಿ ಬೀಳಬಹುದು. ಯಾಕಂದ್ರೆ ವಿರಾಟ್ ನ ಸ್ವಭಾವವೇ ಅಂತಹುದ್ದು. ಆಕ್ರಮಣಕಾರಿ ಪ್ರವೃತ್ತಿಯ ಜೊತೆ ಪ್ರತಿಭೆ, ಅನುಭವ ಇರುವುದರಿಂದ ಒಂದೇ ಒಂದು ಇನಿಂಗ್ಸ್ ಸಾಕು. ವಿರಾಟ್ ಕೊಹ್ಲಿಯ ಹಳೆಯ ಬ್ಯಾಟಿಂಗ್ ವೈಭವ ಮತ್ತೆ ಮರುಕಳಿಸಬಹುದು.
ಈ ನಡುವೆ, ನಾಯಕತ್ವ ಕಳೆದುಕೊಂಡಾಗ ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಹೇಳಿಕೆ ನೀಡಿದ್ದರು. ವಿರಾಟ್ ಹೇಳಿಕೆ ಸಹಜವಾಗಿಯೇ ಗಂಗೂಲಿಯವರನ್ನು ಕುಪಿತಗೊಳ್ಳುವಂತೆ ಮಾಡಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಯವರಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದರು ಎಂಬ ಸುದ್ದಿಯೂ ಹೊರಬಿದ್ದಿದೆ.
ಆದ್ರೆ ಈ ಸುದ್ದಿಯನ್ನು ಸೌರವ್ ಗಂಗೂಲಿ ಅಲ್ಲಗಳೆದಿದ್ದಾರೆ. ಶೋಕಾಸ್ ನೋಟಿಸು ವಿಚಾರ ನಿಜವಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ‘
ಇದೇ ವೇಳೆ ಸೌರವ್ ಗಂಗೂಲಿ ಟ್ವಿಟ್ ಕೂಡ ಮಾಡಿದ್ದರು. ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಉತ್ತುಂಗಕ್ಕೇರಿತ್ತು. ಇದರಲ್ಲಿ ಯಾವುದೇ ಸಂದೇಹವಿಲ್ಲ. ನಾಯಕತ್ವದಿಂದ ಕೆಳಗಿಳಿದಿರುವುದು ಅವರ ವೈಯಕ್ತಿಕ ನಿರ್ಧಾರ. ಬಿಸಿಸಿಐ ಕೂಡ ಇದನ್ನು ಗೌರವಿಸುತ್ತದೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಭವಿಷ್ಯದಲ್ಲಿ ತಂಡಕ್ಕೆ ಅವರ ಸೇವೆ ಅಗತ್ಯವಿದೆ. ವಿರಾಟ್ ಗ್ರೇಟ್ ಪ್ಲೇಯರ್. ವೆಲ್ ಡನ್ ಅಂತ ಸೌರವ್ ಗಂಗೂಲಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು.
ಒಟ್ಟಿನಲ್ಲಿ ಶೋಕಾಸ್ ನೋಟಿಸ್ ನೀಡುವ ವಿಚಾರದಲ್ಲಿ ಗಂಗೂಲಿ ಈಗ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೆ ವಿರಾಟ್ ಮತ್ತು ಗಂಗೂಲಿ ನಡುವೆ ಏನು ನಡೆದಿದೆ.. ಏನು ನಡೆಯುತ್ತಿದೆ ಎಂಬುದು ಅವರಿಬ್ಬರಿಗಷ್ಟೇ ಗೊತ್ತು.