Astrology – ನವರಾತ್ರಿಯ ನಾಲ್ಕನೇ ದಿನ – ದುರ್ಗೆಯ “ಶೈಲಜಾ” ರೂಪ – ಬ್ರಹ್ಮಾಂಡದ ಆದಿಶಕ್ತಿ
ಇಂದು ಚೈತ್ರ ನವರಾತ್ರಿಯ ನಾಲ್ಕನೇ ದಿನ. ಈ ದಿನ ದುರ್ಗಾ ದೇವಿಯ ನಾಲ್ಕನೇ ರೂಪವಾದ ಕೂಷ್ಮಾಂಡವನ್ನು ಪೂಜಿಸಲಾಗುತ್ತದೆ. ಬ್ರಹ್ಮಾಂಡವು ಸೃಷ್ಟಿಯಾಗದಿದ್ದಾಗ ಮತ್ತು ಸುತ್ತಲೂ ಕತ್ತಲೆ ಇದ್ದಾಗ, ದೇವಿಯು ತನ್ನ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದಳು, ಆದ್ದರಿಂದ ಅವಳನ್ನು ಬ್ರಹ್ಮಾಂಡದ ಆದಿಶಕ್ತಿ ಎಂದು ಕರೆಯಲಾಗುತ್ತದೆ.
ಮಾ ಕೂಷ್ಮಾಂಡ ಎಂಟು ತೋಳುಗಳನ್ನು ಹೊಂದಿದೆ. ಆದ್ದರಿಂದ ಅಷ್ಟಭುಜ ಎಂದೂ ಕರೆಯುತ್ತಾರೆ. ತಾಯಿ ತನ್ನ ಭಕ್ತರ ಕಷ್ಟಗಳನ್ನು ಮತ್ತು ರೋಗಗಳನ್ನು ನಾಶಮಾಡುತ್ತಾಳೆ.
ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು.
ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು. ಈಗ ನಾವು ನಾಲ್ಕು ಮತ್ತು ಐದನೇಯ ದಿನದ ಮಹತ್ವವನ್ನು ತಿಳಿಯೋಣ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ – ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ – ತಪ್ಪದೆ ಕರೆ ಮಾಡಿ 85489 98564
ನಾಲ್ಕನೇ ದಿನ – ದುರ್ಗೆಯ “ಶೈಲಜಾ” ಎನ್ನುವ ರೂಪ ಅಥವಾ “ಕೂಷ್ಮಾಂಡಾ” ಎನ್ನುವ ರೂಪದಲ್ಲಿ ಪೂಜಿಸಬೇಕು. ಈ ಸ್ವರೂಪದ ತಾತ್ಪರ್ಯ ಮಹತ್ತರವಾದ ಶಕ್ತಿಯುಳ್ಳ ಭಗವತೀ ಎಂದು. ಈ ರೂಪವನ್ನು
ರಕ್ತವರ್ಣಾಂ ಚತುರ್ಬಾಹುಂ ರಕ್ತವಸ್ತ್ರಾದ್ಯಲಂಕೃತಾಂ |
ಪಾಶಾಮಂಕುಶಾಂ ಮಾತುಲಿಂಗಧರಾಂ ಮೂಷಿಕವಾಹಿನೀಂ ||
ಎಂಬ ಮಂತ್ರದಿಂದ ಧ್ಯಾನಿಸಿ. ಕೆಂಪು ಬಣ್ಣದ ವಸ್ತ್ರವನ್ನು ಇಟ್ಟು ಮತ್ತು ಉಟ್ಟು; ತಾಯಿಗೆ ಇಂದಿನ ದಿನ “ಮಧು ಪ್ರೀತಾ” ಎನ್ನುವರು. ಅಂದರೆ ನವರಾತ್ರಿಯ ನಾಲ್ಕನೇಯ ದಿನದಂದು ಶ್ರೀದೇವಿಗೆ ಮಧು ( ಜೇನುತುಪ್ಪ) ವನ್ನು ನೈವೇದ್ಯ ಮಾಡಬೇಕು. ಈ ದಿನ ಅವಳಿಗೆ ಅದು ಅತ್ಯಂತ ಪ್ರಿಯವಾಗಿರುತ್ತದೆ. ಕೂಷ್ಮಾಂಡದಂತೆ ಇರುವ ನಮ್ಮ ಪಾಪದ ಸಂಗ್ರಹವನ್ನು ನಾಶ ಮಾಡುವ ಶಕ್ತಿಯುಳ್ಳ ಆ ತಾಯಿಯನ್ನು ಇಂದು ಪೂಜಿಸಿವುದರಿಂದ ನಮ್ಮ ಪಾಪವೆಲ್ಲಾ ಕರಗುವುದು.