ಕೊಹ್ಲಿ ಆಡಿದ ಅರ್ಧದಷ್ಟು ಪಂದ್ಯಗಳನ್ನ ಆಡಿಲ್ಲ… ಅವರಿಗೇನು ಗೊತ್ತು.. ವಿರಾಟ್ ತಾಕತ್ತು Keerthi Azad sportskarnataka
ಇಂಡಿಯನ್ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿಯಿಂದ ಏಕದಿನ ನಾಯಕತ್ವ ಕಿತ್ತುಕೊಂಡಿರುವುದು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಒಂಡೇ ಕ್ರಿಕೆಟ್ ನಾಯಕತ್ವದಿಂದ ಕೊಹ್ಲಿಯನ್ನ ಕಿತ್ತಾಕಿ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಪಟ್ಟ ನೀಡಿರುವು ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗಲೂ ಚರ್ಚೆಗೆ ಗ್ರಾಸವಾಗುತ್ತಲೇ ಇದೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಮೀಡಿಯಾ ಮುಂದೆ ಬಂದು ಬಿಸಿಸಿಐ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸೌರವ್ ಗಂಗೂಲಿ ಅವರ ಹೇಳಿಕೆಗಳನ್ನು ಖಂಡಿಸುತ್ತಿರುವುದಾಗಿ ವಿರಾಟ್ ಬಹಿರಂಗವಾಗಿಯೇ ಹೇಳಿದ್ದಾರೆ. ಇದರಿಂದ ಕ್ಯಾಪ್ಟನ್ಸಿ ವಿವಾದ.. ಕೊಹ್ಲಿ ವರ್ಸಸ್ ಬಿಸಿಸಿಐ ಆಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಕೀರ್ತಿ ಆಜಾದ್ ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿ, ಬಿಸಿಸಿಐ ಹಾಗೂ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ವಿರಾಟ್ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ವ್ಯವಹಾರಿಸಿದ ರೀತಿ ತಪ್ಪಾಗಿ ಕಾಣಿಸುತ್ತಿದೆ. ಏಕದಿನ ನಾಯಕತ್ವದಿಂದ ವಜಾಮಾಡುತ್ತಿರುವುದಾಗಿ ಹೇಳುವುದು ಸರಿಯಾಗಿರಬಹುದು. ಆದ್ರೆ ಹೇಳಿದ ರೀತಿ ಸರಿಯಲ್ಲ. ವಿರಾಟ್ ಕೊಹ್ಲಿ ನಾಯಕನಾಗಿ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಇಂಟರ್ ನ್ಯಾಷನಲ್ ಮ್ಯಾಚ್ ಗಳನ್ನಾಡಿ ಒಬ್ಬ ಸಿನಿಯರ್ ಆಟಗಾರನಾಗಿ ತಂಡದಲ್ಲಿದ್ದಾರೆ. ಇಷ್ಟು ಅನುಭವಸ್ಥ ಆಟಗಾರನಿಗೆ ಆಯ್ಕೆ ಸಮಿತಿ ಕನಿಷ್ಠ ಗೌರವ ನೀಡಬೇಕು. ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮೊದಲೇ ವಿರಾಟ್ ಗೆ ಹೇಳಿದ್ದರೇ ಚೆನ್ನಾಗಿ ಇರುತ್ತಿತ್ತು. ಹೀಗಿರುವ ಸೆಲೆಕ್ಟರ್ಸ್ ದೊಡ್ಡವರಾಗಿರಬಹುದು. ಆದ್ರೆ ಕೊಹ್ಲಿ ಆಡಿರುವ ಮ್ಯಾಚ್ ಗಳಲ್ಲಿ ಅರ್ಧದಷ್ಟು ಕೂಡ ಅವರು ಆಡಿಲ್ಲ. ಹೀಗಿದ್ದಾಗ ಆತನ್ನ ಅವಮಾನಿಸುವ ಹಕ್ಕು ಅವರಿಗಿಲ್ಲ. ನಾನು ನ್ಯಾಷನಲ್ ಸೆಲೆಕ್ಟರ್ ಆಗಿ ಇದ್ದ ಸಂದರ್ಭದಲ್ಲಿ ತಂಡವನ್ನು ಸೆಲೆಕ್ಟ್ ಮಾಡಿ ಅಧ್ಯಕ್ಷರ ಗಮನಕ್ಕೆ ತರುತ್ತಿದ್ದೇವು. ಅವರು ಒಂದು ಬಾರಿ ಪರಿಶೀಲಿಸಿ ಓಕೆ ಅಂದ್ರೆ ತಂಡವನ್ನು ಪ್ರಕಟಿಸುತ್ತಿದ್ದೇವು. ಇದು ರೂಲ್. ಆದ್ರೆ ಅದನ್ನ ಈಗ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣಾಪ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಟೆಸ್ಟ್ಗಳು, ಮೂರು ಏಕದಿನ ಪಂದ್ಯಗಳನ್ನ ಆಡಲಿವೆ. ಡಿಸೆಂಬರ್ 26 ರಂದು ಸೆಂಚೂರಿಯನ್ ನಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗಲಿದೆ. ಈಗಾಗಲೇ ದಕ್ಷಿಣಾಪ್ರಿಕಾ ತಲುಪಿರುವ ಟೀಂ ಇಂಡಿಯಾಗೆ ಆಫ್ರಿಕಾದ ಸಾಂಸ್ಕೃತಿಕ ಡ್ಯಾನ್ಸ್ ಮೂಲಕ ಸ್ವಾಗತ ಕೋರಲಾಗಿದೆ. ಭಾರತದ ಆಟಗಾರರು ಒಂದು ದಿನದ ಐಶೋಲೇಷನ್ನಲ್ಲಿ ಇರಲಿದ್ದಾರೆ.
ಇನ್ನು ಟೆಸ್ಟ್ ಸರಣಿಗೆ ಸ್ಟಾರ್ ಓಪನರ್ ರೋಹಿತ್ ಶರ್ಮಾ, ಆಲ್ ರೌಂಡರ್ ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅಲಭ್ಯರಾಗಿದ್ದಾರೆ.